35.7 C
Bellary
Wednesday, May 15, 2024

Localpin

spot_img

ಬೆಳಗಾವಿಯ ಮಹಿಳೆ ಬೆತ್ತಲೆ ಪ್ರಕರಣ; ಆರೋಪಿಗಳನ್ನು ಕೂಡಲೇ ಬಂಧಿಸಿ

ಬಳ್ಳಾರಿ: ನಗರದ ರಾಯಲ್ ವೃತ್ತದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಬೆಳಗಾವಿ ಜಿಲ್ಲೆಯಲ್ಲಿ ಅಮಾನವೀಯವಾಗಿ ನಡೆದ ಮಹಿಳೆ ಬೆತ್ತಲೆ ಪ್ರಕರಣ ಹಾಗೂ ಜಿಲ್ಲೆಯಲ್ಲಿ ನಡೆಯುತ್ತಿರುವ ಹೆಣ್ಣು ಶಿಶು ಭ್ರೂಣ ಹತ್ಯೆ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ವಿಧಾನ ಪರಿಷತ್ ಸದಸ್ಯರಾದ ವೈಎಂ ಸತೀಶ್ ಅವರು ಮಾತನಾಡಿ ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಮಹಿಳೆಯನ್ನು ಬೆತ್ತಲೆ ಮಾಡಿದ ಘಟನೆ ನಡೆದಿರುವುದು ಬಹಳ ನೋವು ತಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಗೃಹ ಸಚಿವರು ಸಮರ್ಪಕ ಉತ್ತರ ಸಹ ನೀಡಲಿಲ್ಲ,ಸರ್ಕಾರ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಸ್ವಯಂ ಪ್ರೇರಿತರಾಗಿ ಹೈ ಕೋರ್ಟ್ ಸುಮೋಟೋ ದಾಖಲಿಸಿಕೊಂಡು, ಕೋರ್ಟ್ ಮೂಲಕವೇ ವಿಚಾರಣೆ ನಡೆಯುತ್ತಿದೆ. ಈ ಘಟನೆಗೆ ಸಂಬಂಧಿಸಿದ ಆರೋಪಿಗಳನ್ನು ಸರ್ಕಾರ ಕೂಡಲೇ ಬಂಧಿಸಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಮುರಹರಿ ಗೌಡ, ಗುರು ಲಿಂಗನ ಗೌಡ, ಗುತ್ತಿಗೆ ನೂರು ವಿರುಪಾಕ್ಷ ಗೌಡ, ಹನುಮಂತಪ್ಪ, ಮಹಿಪಾಲ್, ಸುಗುಣಾ, ಸುಮಾ ರೆಡ್ಡಿ, ಶ್ರೀನಿವಾಸ್ ಪಾಟೀಲ್, ರಾಮಾಂಜನೇಯ, ರಾಜು, ಪುಷ್ಪಲತಾ ಸೇರಿದಂತೆ ಮತ್ತಿತರು ಇದ್ದರು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles