ಬೆಳಗಾಯಿತು ವಾರ್ತೆ |www.belagayithu.in
ಬಳ್ಳಾರಿ, ಮೇ.14: ಪಶ್ಚಿಮ ಬಂಗಾಳದ ಕಲ್ಕತ್ತಾ ನಗರದಲ್ಲಿ 145 ನೇ ಬಿಎಸ್ಎಫ್ ಬೆಟಾಲಿ ಯನ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನಗರದ ಕೆ. ರಾಮಕೃಷ್ಣ ಅವರು ಮೇ 12 ರಂದು ಹುತಾತ್ಮರಾಗಿದು. ರಾಮಕೃಷ್ಣ ಅವರ ಪಾರ್ಥಿವ ಶರೀರ ಇಂದು ನಗರಕ್ಕೆ ಬಂದಾಗ ಎಂ.ಜಿ. ಸರ್ಕಲ್ ನಿಂದ ಮಾಜಿ ಸೈನಿಕರು, ನಾಗರೀಕರು ಮೆರವಣಿಗೆ ಮೂಲಕ ಎಪಿಎಂಸಿ ಮಾರ್ಕೆಟನ ಹತ್ತಿರ ಇರುವ ಬೆಂಕಿ ಮಾರಮ್ಮ ದೇವಸ್ಥಾನದ ಬಳಿಯ ಕೊಳಚಿಗೇರಿಗೆ ತರಲಾಯಿತು. ರಾಮಕೃಷ್ಣ ಇವರು ನಗರದ ಉಜ್ಜಯನಿ ಶಾಲೆಯಲ್ಲಿ ಅಭ್ಯಾಸ ಮಾಡಿ, 2002 ರಲ್ಲಿ ಬಿಎಸ್ ಎಫ್ ಸೇನೆಯಲ್ಲಿ ಸೇವೆಗೆ ಸೇರಿದ್ದರು,ಅವರು ಇಂದು ತಾಯಿ. ಪತ್ನಿ ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಸಕಲ ಸರ್ಕಾರಿ ಗೌವರದೊಂದಿಗೆ ಮಂಗಳವಾರ ನಗರದ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರ ನಡೆಸಲಾಯಿತು.