ಬೆಳಗಾಯಿತು ವಾರ್ತೆ |www.belagayithu.in
ಮರಿಯಮ್ಮನಹಳ್ಳಿ: ಪಟ್ಟಣದ ನಾಡಕಛೇರಿಯಲ್ಲಿ ಶುಕ್ರವಾರ ಸಂಜೆ ಕಾಣಿಸಿಕೊಂಡ ಬೆಂಕಿಯಿಂದ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.
ವಿದ್ಯುತ್ ಶಾಟ್ ಸರ್ಕ್ಯೂಟ್ ನಿಂದ ಉಂಟಾದ ಅವಘಡದಿಂದ ಕಚೇರಿಯಲ್ಲಿದ್ದ ಲಕ್ಷಾಂತರ ರೂ.ಗಳ ಬೆಲೆಬಾಳುವ 3 ಕಂಪ್ಯೂಟರ್,1 ಸ್ಕ್ಯಾನರ್,1 ಪ್ರಿಂಟರ್,ಪೀಠೋಪಕರಣಗಳು ಹಾಗು ದಾಖಲೆ,ಕಡತಗಳು ಸುಟ್ಟು ಭಸ್ಮವಾಗಿವೆ.
ಗುಡ್ ಫ್ರೈಡೆ ನಿಮಿತ್ತ ಕಚೇರಿಗೆ ರಜೆ ಇರುವ ಕಾರಣ,ಜನಸಂದಣಿ,ಸಿಬ್ಬಂದಿಗಳು ಇರದ ಕಾರಣ ಜೀವಹಾನಿಯಾಗಿಲ್ಲ ಎಂಬುದು ಸಮಾಧಾನದ ಸಂಗತಿ.ಸುತ್ತಲಿನ ನಿವಾಸಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಮತ್ತು ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಹೊಸಪೇಟೆ ಅಗ್ನಿಶಾಮಕದಳ ಸಕಾಲಕ್ಕೆ ಆಗಮಿಸಿ,ಬೆಂಕಿನಂದಿಸಿ ಆಗುತ್ತಿರುವ ಹೆಚ್ಚಿನ ಅನಾಹುತವನ್ನು ತಪ್ಪಿಸಿದರು.ಈ ಸಂಬಂಧ ಪಟ್ಟಣದ ಪೊಲೀಸ್ ಠಾಣೆ ಹಾಗು ಅಗ್ನಿಶಾಮಕ ದಳದವರು, ಉಪತಹಶಿಲ್ದಾರ ನಾಗರಾಜ್ ರವರು ನೀಡಿದ ಮಾಹಿತಿ ಮೇರೆಗೆ ದೂರು ದಾಖಲಿಸಿ ಕೊಂಡಿದ್ದಾರೆ. ಈ ವೇಳೆ ಕಂದಾಯ ಇಲಾಖೆಯ ಅಂದಾನಗೌಡ ಇದ್ದರು.