ಬಳ್ಳಾರಿ: ಬಳ್ಳಾರಿ ನಗರದಲ್ಲಿ ಎನ್ಐಎ ಕಾರ್ಯಾಚರಣೆ ಚುರುಕುಗೊಂಡಿದ್ದು, ನಿಷೇಧಿತ ಪಿಎಫ್ಐನ 7 ಮಂದಿಯ ಮನೆಗಳ ಮೇಲೆ ದಾಳಿ ನಡೆಸಿ ಓರ್ವನನ್ನು ವಶಕ್ಕೆ ಪಡೆಯಲಾಗಿದೆ.ಬಳ್ಳಾರಿಯಲ್ಲಿ ಒಟ್ಟು 9 ಎನ್ಐಎ ತಂಡಗಳು ಕಾರ್ಯಾಚರಣೆ ನಡೆಸಲಾಗಿದೆ.
ನಗರದ ಕೌಲ್ ಬಜಾರ್, ಜಾಗೃತಿ ನಗರ ಸೇರಿದಂತೆ ಮತ್ತಿತರ ನಗರದಲ್ಲಿ ಎನ್ ಐಎ ತಂಡ ಶೋಧ ನಡೆಸಿ,
ಬಳ್ಳಾರಿಯ ಶಮಿವುಲ್ಲಾ ಎಂಬಾತನನ್ನು ಎನ್ಐಎ ಅಧಿಕಾ- ರಿಗಳು ವಶಕ್ಕೆ ಪಡೆದಿದ್ದಾರೆ. ಶಮಿವುಲ್ಲಾ, ಬೆಂಗಳೂರಲ್ಲಿ ವ್ಯಾಸಂಗ ಮಾಡುತ್ತಿದ್ದರು. ಶಮಿವುಲ್ಲಾ ಎಂಬಾತನ ಬ್ಯಾಡರಹಳ್ಳಿಯ ಬಾಡಿಗೆ ಮನೆಯ ಮೇಲೆ ದಾಳಿ ಮಾಡಿ 7 ಕೆಜಿ ಸೋಡಿಯಂ ನೈಟ್ರೇಟ್ ವಶಪಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಬಳ್ಳಾರಿಯ ಮಾಜಿ ಪಿಎಫ್ಐ ಪ್ರಧಾನ ಕಾರ್ಯದರ್ಶಿ ಸುಲೇಮಾನ್ ಅವರ ಮನೆಯಲ್ಲೂ ಶೋಧ ಕಾರ್ಯ ನಡೆಸಿದ್ದಾರೆ. ಈತ ಆಫ್ಘಾನಿಸ್ಥಾನಕ್ಕೆ ಹೋಗಿ ಕಾನೂನುಬಾಹಿರ ಚಟುವೆಟಿಕೆಗಳನ್ನು ಮಾಡಲು ಯೋಜನೆಯನ್ನು ಮಾಡಿಕೊಂಡಿದ್ದ ಎಂದು ವರದಿಯಾಗಿದೆ.