ಬೆಳಗಾಯಿತು ವಾರ್ತೆ | http://www.belagayithu.in
ಬಳ್ಳಾರಿ: ನಗರದ ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರ ( ಬಿಎಂಸಿಆರ್ ) ಮೈದಾನದಲ್ಲಿ ಬುಧವಾರ ಬೆಳಿಗ್ಗೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಸಂಯೋಜಿತ ಕಾಲೇಜುಗಳು, ದಿತಾಬೋಧ ಸುಸ್ಥಿರ ಸಮುದಾಯ ಅಭಿವೃದ್ಧಿ ಪ್ರತಿಷ್ಠಾನ ಹಾಗೂ ಭಾರತ ಸರ್ಕಾರದ ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ನಶಾಮುಕ್ತ ಭಾರತ – ಯುವ ಶುದ್ದಿ ಅಭಿಯಾನದ ವಾಕಥಾನ್ಗೆ ರಾಜ್ಯಪಾಲರಾದ ಥಾವರ್ ಚಂದ್ ಗೆಹೋಟ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ‘ಮಹಾಪೌರರಾದ ಪಿ.ಗಾದೆಪ್ಪ, ಕಲ್ಯಾಣ ಮಠದ ಕಲ್ಯಾಣ ಸ್ವಾಮೀಜಿಗಳು,
ಕ್ರಿಶ್ಚಿಯನ್ ಧರ್ಮಗುರು ಹೆನ್ಡ್ರಿಚ್ ಡಿಸೋಜಾ, ಉಪ ಕುಲಪತಿ ಭಗವಾನ್ ಬಿಸಿ,
ರತನ್ ಕೆ, ಬಸವರಾಜ್ ಮೇಟಿ,ಧನ ಕೋಟೆ ಬಸವರಾಜ್,ಚಿದಾನಂದ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.





