ಬೆಳಗಾಯಿತು ವಾರ್ತೆ
ಬಳ್ಳಾರಿ: ೧೮ನೇ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವೆಂಕಟ್ ನಾಗ್ ಕೋಲಾಚಲಂ ಅವರು ಅಮೇರಿಕಾದಿಂದ ಬಳ್ಳಾರಿಗೆ ಬಂದು ಮತಹಾಕಿ ಪ್ರಜಾಪ್ರಭುತ್ವವನ್ನು ಎತ್ತಿಹಿಡಿದಿದ್ದಾರೆ.
ಇವರು ಅಮೇರಿಕಾದಲ್ಲಿ ಕೆಲಸ ಮಾಡುತ್ತಿದ್ದು, ತನ್ನ ಮತ ಚಲಾಯಿಸಲು ಬಳ್ಳಾರಿಗೆ ಬಂದಿದ್ದಾರೆ.
ಮತ ಚಲಾಯಿಸಿ ಮಾತನಾಡಿದ ಅವರು, ಮತ ಚಲಾಯಿಸುವುದು ನಮ್ಮೆಲ್ಲರ ಹಕ್ಕು. ಇದರಿಂದ ನಮ್ಮ ಪ್ರಜಾಪ್ರಭುತ್ವಕ್ಕೆ ಗೌರವವನ್ನು ನೀಡಿದಂತಾಗುತ್ತದೆ. ನಮ್ಮ ರಾಜ್ಯ ಮತ್ತು ದೇಶದ ಒಳಿತಿಗಾಗಿ ನಾವು ಮತವನ್ನು ಹಾಕಬೇಕು ಎಂದರು.





