30.3 C
Bellary
Sunday, May 12, 2024

Localpin

spot_img

ದೇಶದಲ್ಲಿ ಈಗ ನಡೆಯುತ್ತಿರುವ ಚುನಾವಣೆ ಪ್ರಜಾಪ್ರಭುತ್ವ ಉಳಿವಿಗಾಗಿ

ಬೆಳಗಾಯಿತು ವಾರ್ತೆ | www.belagayithu.in
ಹರಪನಹಳ್ಳಿ: ಈ ದೇಶದಲ್ಲಿ ಈಗ ನಡೆಯುತ್ತಿರುವ ಚುನಾವಣೆ ಪ್ರಜಾಪ್ರಭುತ್ವ ಉಳಿವಿಗಾಗಿ ಎಂದು ಮಾಜಿ ಸಚಿವ ಹೆಚ್.ಆಂಜನೇಯ ಹೇಳಿದರು.
ಪಟ್ಟಣದ ಹೊರವಲಯದಲ್ಲಿರುವ ಸಮತಾ ರೆಸಾರ್ಟ್ನಲ್ಲಿ ಶನಿವಾರ ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ದೇಶಲ್ಲಿ ಸಮಾಜಿಕ ನ್ಯಾಯ ಹಾಗೂ ಪ್ರಜಾಪ್ರಭುತ್ವದ ಉಳಿವಿಗಾಗಿ ಕಾಂಗ್ರೆಸ್ ಬೇಕು ಎಂದ ಅವರು ಶೋಷಿತ ಸಮುದಾಯಗಳಿಗೆ ಸಮಾನತೆ ಕೊಟ್ಟಿದ್ದು ಇಂದಿರಾಗಾಂಧಿ ಎಂದರು.
ದೇಶಕ್ಕೆ ಸ್ವಾತಂತ್ರ‍್ಯ ತಂದು ಕೊಟ್ಟವರು ನಾವು, ಬಿಜೆಪಿ ಅವರು ಓದಿರುವ ಶಾಲಾ ಕಾಲೆಜು, ಆಸ್ಪತ್ರೆ ಕಟ್ಟಿದ್ದೇವೆ. ಪಾಕಿಸ್ತಾನ, ಚೈನಾ ದೇಶದವರ ವಿರುದ್ದ ಯುದ್ಧ ಮಾಡಿದವರು ನಾವು. ಐದು ಗ್ಯಾರಂಟಿ ಪದವನ್ನು ಬಿಜೆಪಿಯರು ಕದ್ದಿದ್ದಾರೆ. ನಾವು ನುಡಿದಂತೆ ನಡೆದಿದ್ದೇವೆ. ಬಿಜೆಪಿ ಅವರಿಗೆ ಜನ ಬಳಿ ಹೋಗಿ ಮತ ಕೇಳುವ ಹಕ್ಕಿಲ್ಲ. ಈ ಪಂಚ ನ್ಯಾಯ ನೀಡುತ್ತೇವೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ.ಅಂಜಿನಪ್ಪ ಮಾತನಾಡಿ ಇಂದು ಶೋಷಿತ ಸಮುದಾಯದವರು ಜಾಗೃತರಾಗಬೇಕು ನಾವು ಭಯದ ವಾತಾವರಣದಲ್ಲಿ ಬದುಕುತ್ತಿದ್ದೇವೆ. ಸಂವಿಧಾನವನ್ನು ಬದಲಾವಣೆ ಮಾಡುತ್ತಿದ್ದೇವೆ ಎಂದು ಹೇಳುತ್ತಿರುವ ಬಿಜೆಪಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕಿದೆ. ಚುನಾವಣೆಲ್ಲಿ ಮತದಾನ ನಮಗೆ ಅಸ್ತ ಅದನ್ನು ನಾವು ಇಂದು ಪ್ರಯೋಗ ಮಾಡಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ ಅವರನ್ನು ಅತೀ ಹೆಚ್ಚು ಮತಗಳಿಂದ ಗೆಲ್ಲಿಸಬೇಕು ಎಂದು ಕರೆ ನೀಡಿದರು.
ಕಾಂಗ್ರೆಸ್ ಪಕ್ಷದ ಮುಖಂಡ ಕೋಡಿಹಳ್ಳಿ ಭೀಮಪ್ಪ ಮಾತನಾಡಿ ಕಾಂಗ್ರೆಸ್ ಪಕ್ಷ ಸಮುದ್ರ ಇದ್ದಂತೆ ಅದು ಎಲ್ಲಾ ಸಮುದಾಯಗಳನ್ನು ಒಗ್ಗೂಡಿಸಿಕೊಂಡು ಹೋಗುವ ಪಕ್ಷ ಎಂದರು.
ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಕುಬೇರಪ್ಪ, ಎಂ.ಪಿ.ವೀಣಾಮಹಾಂತೇಶ, ಕಂಚಿಕೇರಿ ಎಂ.ಬಿ. ಅಂಜಿನಪ್ಪ, ಹಲಗೇರಿ ಮಂಜಪ್ಪ, ಕೆ.ಅಶೋಕ ಓ.ರಾಮಪ್ಪ, ಇಸ್ಮಾಯಿಲ್ ಎಲಿಗಾರ, ಮೋತಿನಾಯ್ಕ, ಮಾತನಾಡಿದರು.
ಈ ಸಂದರ್ಭದಲ್ಲಿ ತಾಪಂ ಮಾಜಿ ಸದಸ್ಯರಾದ ಹುಲಿಕಟ್ಟಿ ಚಂದ್ರಪ್ಪ,ಶಿವಣ್ಣ, ಯರಬಾಳು ಹನುಮಂತಪ್ಪ, ಹುಚ್ಚಪ್ಪ, ಸಿ.ಪರಶುರಾಮ, ಬೇತೂರು ಮಂಜುನಾಥ, ನರಸಿಂಹರಾಜ, ಚಿಕ್ಕೇರಿ ಬಸಪ್ಪ, ಹೆಚ್.ಕೊಟ್ರೇಶ, ಸಿ.ಪ್ರತಾಪ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles