29.1 C
Bellary
Tuesday, May 14, 2024

Localpin

spot_img

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕಲಾವಿದರಿಂದ ಪ್ರತಿಭಟನೆ

ಬಳ್ಳಾರಿ:  ವಿಜಯ ನಗರ ಮತ್ತು ಬಳ್ಳಾರಿ ಜಿಲ್ಲಾ ಕಲಾವಿದರ ವೇದಿಕೆ ವತಿಯಿಂದ ಜೋಳದ ರಾಶಿ ದೊಡ್ಡನಗೌಡ ರಂಗ ಮಂದಿರ ದುರಸ್ತಿ, ಕಲಾವಿದರಿಗೆ ಮಾಸಾಶನ, ಅತಿಥಿ ಶಿಕ್ಷಕರ ನೇಮಕ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ಮಾಡಲಾಯಿತು.

ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಜಿಲ್ಲಾಧಿಕಾರಿ ಮೂಲಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಹಿರಿಯ ಕಲಾವಿದ ಜಗದೀಶ್ ಅವರು ಮಾತನಾಡಿ ಜೋಳದರಾಶಿ ದೊಡ್ಡನ ಗೌಡ ರಂಗ ಮಂದಿರ ಮೂರು ವರ್ಷಗಳಿಂದ ಬಾಗಿಲು ಮುಚ್ಚಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಭ್ರಷ್ಟಾಚಾರದಲ್ಲಿ ಮುಳುಗಿದ್ದು ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದರು ಇದುವರೆಗೂ ಕ್ರಮವಹಿಸಿಲ್ಲ ಹಾಗೂ ಕಲಾವಿದರಿಗೆ ಐದು ತಿಂಗಳ ಆದರೂ ಮಾಸಾಶನ ನೀಡಿಲ್ಲ,ರಂಗ ಪದವೀಧರರ ನೇಮಕಾತಿ ಮಾಡುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಡಾ.ಅಣ್ಣಾಜಿ ಕೃಷ್ಣಾ ರೆಡ್ಡಿ,ಜಿಲಾನ್ ಭಾಷಾ, ಸೇರಿದಂತೆ ಮತ್ತಿತರ ಇದ್ದರು.

LEAVE A REPLY

Please enter your comment!
Please enter your name here

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles