ಬಳ್ಳಾರಿ: ನಗರದ ಡಿಎಆರ್ನಲ್ಲಿ ಹೆಡ್ ಕಾನ್ಸ್ಸ್ಟೇಬಲ್ ಆಗಿ ಕರ್ತವ್ಯ ನೀರ್ವಹಿಸುತ್ತಿದ್ದ ಪ್ರಕಾಶ್ ನಾಯ್ಕ್ ಅವರು ಮಂಗಳವಾರ ಬೆಳಿಗ್ಗೆ 3ರ ಸಮಯದಲ್ಲಿ ಪೊಲೀಸ್ ಕ್ವಾಟರ್ಸ್ನಲ್ಲಿ ನೇಣಿಗೆ ಶರಣಾದ ಘಟನೆ ನಡೆದಿದೆ.
ಮೂಲತಃ ಇವರು ಹಗರಿಬೊಮ್ಮನಗಳ್ಳಿ ತಾಲೂಕಿನ ಆನೆಕಲ್ ತಾಂಡದವರಾದ ಪ್ರಕಾಶ್ ನಾಯ್ಕ್ 2021ನೇ ಬ್ಯಾಚ್ನ ಡಿಎಆರ್ ಪೊಲೀಸ್ ಆಗಿ ನೇಮಕ ಹೊಂದಿದ್ದರು.
ಅಧಿಕಾರಿಗಳ ಕಿರುಕುಳ:
ಪ್ರಕಾಶ್ ನಾಯ್ಕ್ ಇವರಿಗೆ ಸಿಸಿಟಿ ಟ್ರೈನಿಂಗ್ ಗೆ ಬೆಂಗಳೂರಿಗೆ ತೆರಳಲು ಮೇಲಾಧಿಕಾರಿಗಳು ಸೂಚಿಸಿದ್ದರು. ಆದರೆ ಪ್ರಕಾಶ್ ನಾಯ್ಕ್ ಇವರು ಟ್ರೈನಿಂಗ್ ಗೆ ಹೊಗಲು ನೀರಾಕರಿಸಿದ್ದರು. ಇದರಿಂದ ಅಧಿಕಾರಿಗಳು ಅವರಿಗೆ ಕಿರುಕುಳ ನೀಡಿದ್ದರಿಂದ ಮಾನಸಿಕ ಒತ್ತಡಕ್ಕೆ ಸಿಲುಕಿ ಪ್ರಕಾಶ್ ನೇಣಿಗೆ ಶರಣಾಗಿದ್ದಾನೆ ಎಂದು ಅವರು ಸಂಬಂಧಿಕರಾದ ವೆಂಕೋಭಿ ಅವರು ಆರೋಪ ಮಾಡಿದ್ದಾರೆ.
ಮಾದ್ಯಮದೊಂದಿಗೆ ಮಾತನಾಡಿದ ವೆಂಕೋಭಿ ಅವರು, ನಮ್ಮ ಹುಡುಗ ಯಾವುದೇ ಕೆಲಸ ಇದ್ದರು ನಮಗೆ ತಿಳಿಸುತ್ತಿದ. ತನಗೆ ಏನೇ ತೊಂದರೆಯಾದರು ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದ. ಇತ್ತಿಚಿನ ದಿನಗಳಲ್ಲಿ ಅವನಿಗೆ ಹುಡುಗಿ ನೋಡಿಕೊಂಡು ಬರಲು ಸಿದ್ದತೆ ನಡೆದಿತ್ತು. ಈ ಹಿನ್ನಲೆ ನಾನು ಮಂಗಳವಾರ ಬುರತ್ತೆನೆ ಎಂದು ಹೇಳಿದ ಪ್ರಕಾಶ್ ನಂತರ ಪೋನ್ ಮಾಡಿ ನನಗೆ ಟ್ರೈನಿಂಗ್ ಗೆ ಹಾಕಿದಾರೆ. ನಾನು ಎಷ್ಟೇ ಹೇಳಿದರು ನನ್ನ ಮಾತು ಕೇಳುತ್ತಿಲ್ಲ ಟ್ರೈನಿಂಗ್ ಗೆ ರದ್ದುಗೊಳಿಸಲು ಹಣಕೂಡ ಕೊಟ್ಟಿದಿನಿ ಆದರು ಹಣ ಪಡೆದು ಮತ್ತೆ ಟ್ರೈನಿಂಗ್ ಗೆ ಹೋಗುವಂತೆೆ ಕಿರುಕುಳ ನೀಡುತ್ತಿದ್ದಾರೆ ಎಂದು ಪೋನ್ನಲ್ಲಿ ನಮ್ಮ ಹತ್ತಿರ ಹೇಳಿಕೊಂಡಿದ್ದ ಎಂದು ಅವರು ಹೇಳಿದರು.