ಬಳ್ಳಾರಿ: ಕೃಷಿ ಇಲಾಖೆಯ ವಿಚಕ್ಷಣ ದಳದ ಅಧಿಕಾರಿಗಳು ಕೀಟನಾಶಕ ಉಲ್ಲಂಘನೆ ಕಾಯ್ದೆಯಡಿ ದಾಳಿ ನಡೆಸಿ ಸುಮಾರು 38.85 ಲಕ್ಷ ಮೌಲ್ಯದ ಕೀಟನಾಶಕಗಳನ್ನು ಜಪ್ತಿ ಮಾಡಿದ್ದಾರೆ.
ಬಳ್ಳಾರಿ ಕಸಬಾ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಬಸವರಾಜು ಸಿಂಧಗೇರಿ ನೇತೃತ್ವದಲ್ಲಿ ಕೀಟನಾಶಕ ಹಾಗು ಕೀಟನಾಶಕ ನಿಯಮ ಉಲ್ಲಂಘನೆ ಕಾಯ್ದೆಯಡಿ ಸುಮಾರು 34.85 ಲಕ್ಷ ಮೌಲ್ಯದ 425 ಕೆ.ಜಿ ಎಮಾಮೆಕ್ಟಿನ್ ಬೆಂಜೋಯಟ್ ಕೀಟನಾಶಕವನ್ನು ಜಪ್ತಿ ಮಾಡಿರುತ್ತಾರೆ.