25.1 C
Bellary
Monday, May 13, 2024

Localpin

spot_img

ದೇಶಕ್ಕೆ ಮೋದಿ,ಬಳ್ಳಾರಿಗೆ ಶ್ರೀರಾಮುಲು:ಅರುಣಾ ಲಕ್ಷ್ಮಿ 

ಬೆಳಗಾಯಿತು ವಾರ್ತೆ |www.belagayithu.in
ಬಳ್ಳಾರಿ: ನಾವು ಮಾತೃ ಪಕ್ಷ ಬಿಜೆಪಿಗೆ ಮರಳಿದ್ದು, ನನಗೆ ಖುಷಿಯಾಗಿದೆ. ಪ್ರಧಾನಿ ಮೋದಿ , ಅಮಿತ್ ಶಾ, ಬಿಎಲ್ ಸಂತೋಷ್, ಯಡಿಯೂರಪ್ಪ, ವಿಜಯೇಂದ್ರ ಅವರಿಗೆ ತುಂಬು ಹೃದಯದ ಧನ್ಯವಾದಗಳು. ಮೂವತ್ತು ವರ್ಷದ ಹಿಂದೆ ಶ್ರೀರಾಮುಲು ನಗರ ಸಭೆ ಸದಸ್ಯ ಆಗುವೆ ಅಂತಾ ಜನಾರ್ದನ ರೆಡ್ಡಿಯವರ ಬಳಿ ಕೇಳಿದ್ದರು. ಆದರೆ ನೀನು ಎಂ ಎಲ್ ಎ ಆಗುವಂತವನು ನಗರಸಭೆ ಏಕೆ ಅಂದಿದ್ದರು. ಆದರೆ ಶ್ರೀರಾಮುಲು ಇಲ್ಲ ಮೊದಲು ನಗರ ಸಭೆ ಸದಸ್ಯನಾಗುವೆ ಎಂದಿದ್ದರು ಎಂದು ಬಳ್ಳಾರಿಯ ಬಿಜೆಪಿ ಸಮಾವೇಶದಲ್ಲಿ ಅರುಣಾ ಲಕ್ಷ್ಮಿ ತಿಳಿಸಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ದೇಶಕ್ಕೆ ಮೋದಿ, ಬಳ್ಳಾರಿಗೆ ಶ್ರೀರಾಮುಲು ಅಂತ ಮತ ಹಾಕಬೇಕು. ಮೊನ್ನೆ ಚುನಾವಣೆಯಲ್ಲಿ ಆದ ಘಟನೆಗಳನ್ನ ನೆನಪು ಮಾಡಿಕೊಳ್ಳೋದು ಬೇಡ, ಇದು ಶತೃಗಳಿಗೆ ಅನುಕೂಲ ಆಗುತ್ತದೆ. ಈ ಬಾರಿ ಶ್ರೀರಾಮುಲುರನ್ನ ಗೆಲ್ಲಿಸಿ ಮೋದಿ ಕೈ ಬಲಪಡಿಸೋಣ, ಜನಾರ್ದನ ರೆಡ್ಡಿ ಬಳ್ಳಾರಿ ಉಸ್ತುವಾರಿ ಸಚಿವರಿದ್ದಾಗ ಅಂದಿನ ಸಿಎಂ ಯಡಿಯೂರಪ್ಪ ನವರು ಸಾವಿರ ಕೋಟಿ ಅನುದಾನ ತಂದಿದ್ದರು ಎಂದು ಜನಾರ್ದನ ರೆಡ್ಡಿ ಸಚಿವರಾಗಿದ್ದಾಗ ಮಾಡಿದ ಅಭಿವೃದ್ಧಿ ಪಟ್ಟಿಯನ್ನು ಅರುಣಾ ಲಕ್ಷ್ಮಿ ಓದಿದರು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles