35.7 C
Bellary
Wednesday, May 15, 2024

Localpin

spot_img

ಗಾಳೆಮ್ಮದೇವಿಗೆ ಪೂಜೆಸಲ್ಲಿಸಿ ಪ್ರಚಾರ ಆರಂಭ

ಬೆಳಗಾಯಿತು ವಾರ್ತೆ |www.belagayithu.in

ಮರಿಯಮ್ಮನಹಳ್ಳಿ:ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಅವರು ಇಂದು ಗ್ರಾಮದ ಅಧಿದೇವತೆಯಾದ ಗಾಳೆಮ್ಮದೇವಿಗೆ ಪೂಜೆಸಲ್ಲಿಸಿ ಹೋಬಳಿಯಲ್ಲಿ ಪ್ರಚಾರಕಾರ್ಯ ಆರಂಭಿಸಿದರು. ಮೊದಲಿಗೆ ಡಣಾಪುರಗ್ರಾಮದಲ್ಲಿ ಪ್ರಚಾರ ಆರಂಭಿಸಿದ ಅವರು ಮಾತನಾಡಿ,ಮೋದಿಯವರು ಮತ್ತೊಮ್ಮೆ ದೇಶದ ಪ್ರಧಾನಿಯಾಗಲಿದ್ದಾರೆ. ಅವರ ಕೈ ಬಲಪಡಿಸಲು, ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಬಳ್ಳಾರಿ ಲೋಕಸಭಾ ಕ್ಷೇತ್ರದ ನನ್ನನ್ನು ಲೋಕಸಭೆಗೆ ಆರಿಸಿಕೊಡಲು ಮನವಿಮಾಡಿದರು.
ಈ ಸಂಧರ್ಭದಲ್ಲಿ ಹ.ಬೊ.ಹಳ್ಳಿ ಕ್ಷೇತ್ರದ ಜೆಡಿಎಸ್ ಶಾಸಕ ನೇಮಿರಾಜನಾಯ್ಕ್ ಮಾತನಾಡಿದರು. ವಿ.ಪ.ಸದಸ್ಯ ಸತೀಶರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಚೆನ್ನಬಸವನಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಕೊಟ್ರೇಶ್, ಬೆಣಕಲ್ ಪ್ರಕಾಶ, ವೈ,ಮಲ್ಲಿಕಾರ್ಜುನ, ಎಸ್.ಕೃಷ್ಣನಾಯ್ಕ್, ವೀರೇಶ್ವರಸ್ವಾಮಿ, ಬಾದಾಮಿ ಮೃತ್ಯಂಜಯ ಸೇರಿದಂತೆ ಜೆಡಿಎಸ್, ಬಿಜೆಪಿ ಮುಖಂಡರು ಹಾಜರಿದ್ದರು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles