ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ

ಬೆಳಗಾಯಿತು ವಾರ್ತೆ
ಬಳ್ಳಾರಿ:
ಶ್ರೀ ಮಾತೃ ಮಹಿಳಾ ಮಂಡಳಿ ವತಿಯಿಂದ ನಗರದ ರಾಕ್ ಗಾರ್ಡನ್ ನಲ್ಲಿ ಭಾನುವಾರ ಆಯೋಜನೆ ಮಾಡಲಾಗಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಹಾಸ್ಯ ಕಲಾವಿದ ಪ್ರಾಣೇಶ್ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಮೊಬೈಲ್ ಗೆ ಹೆಚ್ಚು ಒತ್ತು ನೀಡದೆ ಪುಸ್ತಕಕ್ಕೆ ಹೆಚ್ಚಿನ ಸಮಯ ಮೀಸಲಿಡಿ, ಪುಸ್ತಕ ಓದುವುದರಿಂದ ನಮ್ಮಲ್ಲಿ ಹೆಚ್ಚು ಜ್ಞಾನ ವೃದ್ಧಿಯಾಗುತ್ತದೆ ಎಂದು ಅವರು ಹೇಳಿದರು.

ನಂತರ ಮಾತೃ ಮಹಿಳಾ ಮಂಡಳಿಯ ಅಧ್ಯಕ್ಷರಾದ ಪುಷ್ಪಲತಾ ಚಂದ್ರಶೇಖರ ಅವರು ಮಾತನಾಡಿ, ಮಾತೃ ಮಹಿಳಾ ಮಂಡಳಿ ಸ್ಥಾಪನೆ ಮಾಡಿ ಈ ಸಂಸ್ಥೆಯ ಮೂಲಕ ಅನೇಕ ಕಾರ್ಯಕ್ರಮಗಳನ್ನು ಆಯೋಕನೆ ಮಾಡಿ ಮಹಿಳೆಯರಿಗೆ ಅನುಕೂಲ ಮಾಡಿಕೊಡಲಾಗಿದೆ. ನಮ್ಮ ಈ ಮಂಡಳಿ ಸದಾ ಮಹಿಳೆಯರ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ ಎಂದರು.

ಈ ಸಂದರ್ಭದಲ್ಲಿ ಡಾ. ಅನುರಾಧ, ಹಾಸ್ಯ ಕಲಾವಿರಾದ ಬಸವರಾಜ್ ಮಹಾಮನಿ, ಪೋಲಾ ಪದ್ಮಾವತಿ, ಎಲ್ಲನ ಗೌಡ, ಸುನೀತಾ, ಕುಸುಮಾ, ಹೇಮಾ, ದೇವಿ, ಲಕ್ಷ್ಮೀ, ಮೇಮುದಾ ಹಾಗೂ ಮಾತೃ ಮಹಿಳಾ ಮಂಡಳಿ ಸದಸ್ಯರು ಹಾಜರಿದ್ದರು.
ಕಾರ್ಯಕ್ರಮದಲ್ಲಿ ಕೋಮಲಿಕಾ ಮತ್ತು ಕೀರ್ತಿ ನಿರುಪಣೆ ಮಾಡಿದರು.
ಚಂದ್ರಿಕಾ ಚಂದ್ರಕಾಂತ ಅವರು ಸ್ವಾಗತಿಸಿದರು.
ಚಾರುಲತಾ ಅವರು ವಂದನಾರ್ಪಣೆ ಮಾಡಿದರು.
ಗುರು ಡ್ಯಾನ್ಸ್ ಅಕಾಡೆಮಿ ವತಿಯಿಂದ ನೃತ್ಯ ಮಾಡಲಾಯಿತು.
ಪ್ರಸೀದ, ಹಿಂದು ಮತ್ತು ದ್ರಾಕ್ಷಾಯಿಣಿ ಅವರು ನೃತ್ಯ ಮಾಡಿದರು.
ಕೊನೆಯಲ್ಲಿ ನೃತ್ಯ ಮತ್ತು ಗೇಮ್ಸ್, ಫ್ಯಾಶನ್ ಷೋ, ಮಾಡಿದವರಿಗೆ ಬಹುಮಾನ ವಿತರಣೆ ಮಾಡಲಾಯಿತು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles