ಬೆಳಗಾಯಿತು ವಾರ್ತೆ
ಕೊಟ್ಟೂರು : ಹೊಸ ವರ್ಷದ ಯುಗಾದಿ ಅಮಾವಾಸ್ಯೆ ದಿನವಾದ ಸೋಮವಾರದಂದು ನಾಡಿನ ಲಕ್ಷಾಂತರ ಭಕ್ತರ ಆರಾಧ್ಯ ದೈವನಾದ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ದರ್ಶನವನ್ನು ಮಾಜಿ ಶಾಸಕ ಹಾಗೂ ಕೆಎಂಎಫ್ ರಾಜ್ಯಾಧ್ಯಕ್ಷರಾದ ಎಸ್. ಭೀಮನಾಯ್ಕ ದರ್ಶನ ಪಡೆದುಕೊಂಡರು.
ನಂತರ ಬಳ್ಳಾರಿ ಲೋಕಸಭಾ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ತುಕಾರಾಂ ಅವರ ಪರವಾಗಿ ಕೊಟ್ಟೂರು ಪಟ್ಟಣದ ಮುಖಂಡರರ ಮನೆಗಳಿಗೆ ಭೇಟಿ ನೀಡಿ ತುಕಾರಾಂ ಪರವಾಗಿ ಮತ ನೀಡುವಂತೆ ಮುಖಂಡರಗಳಿಗೆ ಮನವಿ ಮಾಡಿದರು.
ನಂತರ ಜೆಪಿ ನಗರದ ಪಟ್ಟಣ ಪಂಚಾಯತಿ ಸದಸ್ಯರಾದ ತೆಗ್ಗಿನಕೇರಿ ಜಗದೀಶ್ ನಿವಾಶಕ್ಕೆ ಭೇಟಿ ನೀಡಿ ಕೆಲ ರಾಜಕೀಯ ಚಟುವಟಿಕೆ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ದ್ವಾರಕೇಶ್, ಕೋಗಳಿ ಕೊಟ್ರೇಶ್, ಅಚ್ಚೆ ಮನೆ ಮಲ್ಲಿಕಾರ್ಜುನ, ಪ. ಪಂ. ಮಾಜಿ ಸದಸ್ಯರಾದ ಸಿರಿಬಿ ಕೊಟ್ರೇಶ್, ಟಿ. ಸುರೇಶ್, ಕಂದಗಲ್,, ಪರಶುರಾಮ್, ಟಿ. ಮೈಲಪ್ಪ, ಜಿ ಕೊಟ್ರೇಶ್, ಬಿ. ಪರಶುರಾಮ್, ಚಿದಾನಂದ ಇತರರು ಉಪಸ್ಥಿತರಿದ್ದರು.