ಬೆಳಗಾಯಿತು ವಾರ್ತೆ |www.belagayithu.in
ಬಳ್ಳಾರಿ: ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಕೆಆರ್ ಎಸ್ ಪಕ್ಷದಿಂದ ಚೆನ್ನಾವೀರ ಚಿತ್ತಾರ ಅವರಿಗೆ ಟಿಕೆಟ್ ನೀಡಲಾಗಿದೆ.
ಬೆಂಗಳೂರಿನ ಕಚೇರಿಯಲ್ಲಿ ಮಂಗಳವಾರ ಕೆಆರ್ ಎಸ್ ಪಕ್ಷದ ರಾಜ್ಯಾಧ್ಯಕ್ಷರಾದ ರವಿಕೃಷ್ಣಾ ರೆಡ್ಡಿ ಅವರು ಚೆನ್ನಾವೀರ ಅವರಿಗೆ ” ಬಿ ” ಪಾರಂ ನೀಡಿದರು.
ಚೆನ್ನಾವೀರ ಚಿತ್ತಾರ ಅವರು 2023ರಲ್ಲಿ ಕೂಡ್ಲಿಗಿ ವಿಧಾನ ಸಭಾ ಚುನಾವಣೆ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಲಿಂಗೇಗೌಡ, ಸರಣಪ್ಪ ರಾಮದುರ್ಗ ಅವರು ಉಪಸ್ಥಿತರಿದ್ದರು.