ಬೆಳಗಾಯಿತು ವಾರ್ತೆ
ಬಳ್ಳಾರಿ: ನಗರದ ಹೇಮಾ ಜುವೆಲರ್ಸ್ ಮಾಲಿಕ ನರೇಶ್ ಸೋನಿ ಅವರ ತಮ್ಮ ಮನೆಯಲ್ಲಿ ದಾಖಲೆ ಇಲ್ಲದ ಸುಮಾರು 5 ಕೋಟಿ 60 ಲಕ್ಷ ನಗದು ಮತ್ತು ಬೆಳ್ಳಿ, ಬಂಗಾರವನ್ನು ಭಾನುವಾರ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಭಂಡಾರು ಅವರು ತಿಳಿಸಿದರು.
ಖಚಿತ ಮಾಹಿತಿ ಬಂದ ಮೇರೆಗೆ ಬ್ರೂಸ್ಪೇಟೆ ಪೊಲೀಸ್ ಠಾಣೆ ಅಧಿಕಾರಿಗಳು ಎಫ್.ಎಸ್.ಟಿ. ಟೀಮ್ ರವರೊಂದಿಗೆ ಮತ್ತು ಠಾಣೆಯ ಸಿಬ್ಬಂದಿಯೊಂದಿಗೆ ದಾಳಿಮಾಡಿದಾಗ ನಗದು ಹಣ ರೂ. 5 ಕೋಟಿ 60 ಲಕ್ಷಗಳು, 2) ರೂ 1 ಕೋಟಿ 4 ಲಕ್ಷ, ಬೆಲೆ ಬಾಳುವ 3 ಕೆ.ಜಿ ಬಂಗಾರದ ಆಭರಣಗಳು, 3) ರೂ 42 ಲಕ್ಷ ಬೆಲೆ ಬಾಳುವ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಾರ್ಯಚರಣೆಯಲ್ಲಿ ಪಿಎಸ್ಐ ವೆಂಕಟೇಶ್ ಚೌಹಾನ್.
ಎಎಸ್ಐ ಅಶೋಕ್ ಮೈನಳ್ಳಿ, ಹೆಚ್.ಸಿ. ಆನಂದ್ ರೆಡ್ಡಿ, ಕುಮಾರ್ ರೆಡ್ಡಿ, ಶರ್ಮಾಸ್, ಆರ್. ಅಂಬಿನೇಯ, ರಾಜಶೇಖರ್, ಶ್ರೀನಿವಾಸ್, ಮಹಿಳಾ ಸಿಬ್ಬಂದಿಯಾದ ಶಕುಂತಲಾ, ಶ್ವೇತಾ, ಸುನೀಲ್, ವಾಸಪ್ಪ, ರಾಮಾಂಜಿನಿ, ರವರು ಭಾಗವಹಿಸಿದ್ದರು ಎಂದು ಅವರು ತಿಳಿಸಿದರು.