ಬೆಳಗಾಯಿತು ವಾರ್ತೆ| www.belagayithu.in
ಮರಿಯಮ್ಮನಹಳ್ಳಿ: ಪಂಚರಾಜ್ಯ ಚುನಾವಣೆಗಳಲ್ಲಿ ಬಿಜೆಪಿಯು ಮೂರು ರಾಜ್ಯಗಳಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ,ಪಟ್ಟಣದ ಬಿಜೆಪಿ ಕಾರ್ಯಕರ್ತರು ಪಟಾಕಿಸಿಡಿಸಿ,ಸಿಹಿವಿತರಿಸಿ ಸಂಭ್ರಮಾಚರಣೆ ಆಚರಿಸಿದರು.
ಬಿಜೆಪಿಜಿಲ್ಲಾ ಉಪಾಧ್ಯಕ್ಷ ಎಸ್.ಕೃಷ್ಣನಾಯ್ಕ್ ಮಾತನಾಡಿ,ಬಿಜೆಪಿ ಸಂಘಟಿತ ಪಕ್ಷವಾಗಿದ್ದು,ಪ್ರಧಾನಿ ನರೇಂದ್ರಮೋದಿಯವರು ಮೂರು ರಾಜ್ಯಗಳಲ್ಲಿ ನಡೆಸಿದ ಅಭೂತಪೂರ್ವ ಪ್ರಚಾರಕ್ಕೆ ಮೂರು ರಾಜ್ಯಗಳಲ್ಲಿ ಮನ್ನಣೆ ದೊರಕಿದೆ.ಅಲ್ಲದೇ ಪಶ್ಚಿಮ ಬಂಗಾಳದಲ್ಲಿ ಮಮತಬ್ಯಾನರ್ಜಿರವರ ಸರ್ವಾಧಿಕಾರ ಧೋರಣೆ ಹಾಗು ವಲಸಿಗರ ಒಲೈಕೆಗೆ ಅಲ್ಲಿನ ಮತದಾರರು ಸೂಕ್ತ ಪಾಠ ಕಲಿಸಿದ್ದಾರೆಂದರು.
ಈ ಮುಖಂಡರಾದ ಡಿ.ರಾಘವೇಂದ್ರ ಶೆಟ್ಟಿ, ಎಸ್.ಎಂ.ವೀರೇಶ್ವರ ಸ್ವಾಮಿ, ಬಂಗಾರಿ ಮಂಜುನಾಥ ಮಾತನಾಡಿದರು.ಮಾಜಿ ಜಿ.ಪಂ.ಸದಸ್ಯ ಎಲ್.ಮಂಜುನಾಥ, ಮುಖಂಡರಾದ ಗುಂಡಾಕೃಷ್ಣ,ಬ್ಯಾಲಕುಂದಿ ಶ್ರೀನಿವಾಸ, ಹೆಚ್.ರವಿಕಿರಣ್,ಜಿ.ರಾಜೇಶ್,ನರಸಿಂಹ ಮೂರ್ತಿ,
,ಚಿಲಕನಹಟ್ಟಿ,ಅಂಜಿನಿ,ದುರುಗಪ್ಪ,ಶಶಿಕುಮಾರ್,ಬಿ.ಆನಂದ್, ಅಶೋಕ ದೇವಲಾಪುರ ಹಾಜರಿದ್ದರು.





