ವಾಣಿಜ್ಯ LPG ಪೂರೈಕೆ ಸುಗಮಗೊಳಿಸುವಂತೆ‌ ಸಿಎಂ ಪತ್ರ

ಬೆಳಗಾಯಿತು ವಾರ್ತೆ | Www.belagayithu.in
ಬೆಂಗಳೂರು: ಬೆಂಗಳೂರಲ್ಲಿ ವಾಣಿಜ್ಯ ಎಲ್​ಪಿಜಿ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದ್ದು, ತಕ್ಷಣ ಮಧ್ಯಪ್ರವೇಶಿಸುವಂತೆ ಕೋರಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.
ಎಲ್​ಪಿಜಿ ಉತ್ಪಾದನೆ ಹೆಚ್ಚಿಸುವಂತೆ ಹಾಗೂ ಗೃಹ ಬಳಕೆಗೆ ಎಲ್​ಪಿಜಿ ಪೂರೈಕೆಗೆ ಹೆಚ್ಚಿನ ಆದ್ಯತೆ ನೀಡುವಂತೆ ತೈಲ ಕಂಪನಿಗಳಿಗೆ ನಿರ್ದೇಶಿಸಿರುವ ಕೇಂದ್ರ ಪೆಟ್ರೋಲ್ ಹಾಗೂ ನೈಸರ್ಗಿಕ ಅನಿಲ ಇಲಾಖೆಯ ಪರಿಷ್ಕೃತ ಆದೇಶದಿಂದ ಬೆಂಗಳೂರಲ್ಲಿ ವಾಣಿಜ್ಯ ಎಲ್​ಪಿಜಿ ಸರಬರಾಜಿನಲ್ಲಿ ಕೊರತೆ ಎದುರಾಗುತ್ತಿದೆ.‌ ವಾಣಿಜ್ಯ ಎಲ್​ಪಿಜಿ ಪಡೆಯುವಲ್ಲಿ ವ್ಯತ್ಯಯವಾಗುತ್ತಿರುವುದಾಗಿ ಅನೇಕ ಹೋಟೆಲ್​ ಮತ್ತು ರೆಸ್ಟೋರೆಂಟ್ ಸಂಘಟನೆಗಳು ತಿಳಿಸಿದ್ದಾರೆ. ‌ಒಂದು ವೇಳೆ ಸರಬರಾಜು ಪುನಸ್ಥಾಪಿಸದೇ ಇದ್ದರೆ ತಾತ್ಕಾಲಿಕವಾಗಿ ಹೋಟೆಲ್​ಗಳನ್ನು ಮುಚ್ಚಬೇಕಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles