ಬೆಳಗಾಯಿತು ವಾರ್ತೆ |www.belagayithu.in
ಬಳ್ಳಾರಿ: 2024ರ ಲೋಕಸಭಾ ಚುನಾವಣೆಗೆ ದಿನ ಗಣನೆ ಶುರುವಾಗಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ.
ನಗರದ 38ನೇ ವಾರ್ಡ್ ನ ದೇವಿನಗರದಲ್ಲಿ ಲೋಕಸಭಾ ಅಭ್ಯರ್ಥಿ ಬಿ. ಶ್ರೀ ರಾಮುಲು ಅವರು ಮಂಗಳವಾರ ಪ್ರಚಾರದ ಮೂಲಕ ತಮ್ಮ ಪಕ್ಷದ ಅಭಿವೃದ್ಧಿ ಕೆಲಸಗಳ ಬಗ್ಗೆ ಜನರಿಗೆ ಮಾಹಿತಿ ನೀಡಿದರು.
ನಂತರ ಮಾತನಾಡಿದ ರಾಮುಲು ಅವರು, ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ನರೇಂದ್ರ ಮೋದಿ ಅವರು ಹಲವಾರು ಜನಪರ ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನರಿಗೆ ಉತ್ತಮ ಯೋಜನೆಗಳನ್ನು ತಲುಪಿಸಿದ್ದಾರೆ. ನರೇಂದ್ರ ಮೋದಿ ಅವರು ಪ್ರಧಾನಿಯಾಗಿರುವುದರಿಂದ ನಮ್ಮ ದೇಶ ಸುಭದ್ರವಾಗಿದೆ. ಇಲ್ಲವಾದರೆ ನಮ್ಮ ದೇಶದಲ್ಲಿ ಹಲವಾರು ಕೋಮುಗಲಭೆ, ಅಶಾಂತಿ, ಅಸುರಕ್ಷಿತ ನೆಲೆಸುತ್ತಿತ್ತು. ಆದರೆ ಮೋದಿ ಅವರು ಬಂದ ಮೇಲೆ ಇವುಗಳಿಗೆಲ್ಲ ಬ್ರೇಕ್ ಹಾಕಿದ್ದಾರೆ ಎಂದರು.
ನಾನು ರಾಜಕೀಯ ಕಟ್ಟಿ ಕೊಂಡಿದ್ದು, ಇದೇ ದೇವಿ ನಗರದಿಂದ ಇಲ್ಲಿಯ ಜನರು ಯಾವತ್ತು ನನ್ನ ಕೈ ಬಿಟ್ಟಿಲ್ಲ. ಈ ಬಾರಿಯು ನನ್ನ ಕೈ ಬಿಡಲ್ಲ ಎಂಬ ನಂಬಿಕೆ ಇದೆ. ಮೋದಿ ಅವರು ಈ ಬಾರಿ ಮೂರನೇ ಬಾರಿಗೆ ಪ್ರಧಾನಿ ಯಾಗಲಿದ್ದಾರೆ. ಹಾಗಾಗಿ ದೇಶದ ಅಭಿವೃದ್ಧಿ ಯಾಗಬೇಕಾದರೆ ನಾವು ಮೋದಿ ಅವರನ್ನು ಗೆಲ್ಲಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ, ಅನೀಲ್ ಕುಮಾರ್ ಮೋಕ, ಬಿಜೆಪಿ ಮುಖಂಡ ವಿ.ಅನೂಪ್ ಕುಮಾರ್ ಸೇರಿದಂತೆ ಕಾರ್ಯಕರ್ತರು ಹಾಜರಿದ್ದರು.