ಬೆಳಗಾಯಿತು ವಾರ್ತೆ | www.belagayithu.in
ಬಳ್ಳಾರಿ : ಫೆ.14ರಂದು ಪುಲ್ವಾಮಾ( ಜಮ್ಮ-ಕಾಶ್ಮೀರ) ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಲ್ಯಾಣ ಕರ್ನಾಟಕ ಮಾಜಿ ಅರೆಸೇನಾ ಸಂಘದ ಅಧ್ಯಕ್ಷರಾದ ವೆಂಕಟೇಶ ರಾವ್ ಅವರು ತಿಳಿಸಿದರು.
ನಗರದಲ್ಲಿನ ಮೋತಿ ವೃತ್ತದಲ್ಲಿ ಬುಧವಾರ ಸಂಜೆ 6ಗಂಟೆಗೆ ಪುಲ್ವಾಮಾ( ಜಮ್ಮ-ಕಾಶ್ಮೀರ) ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಆದಕಾರಣ ಬಳ್ಳಾರಿಯ ವಿವಿಧ ಸಂಘಗಳು ಮತ್ತು ಶಾಲೆ ಕಾಲೇಜು ಹಾಗೂ ಎನ್.ಸಿಸಿ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.