ಮರಿಯಮ್ಮನಹಳ್ಳಿ: ಶ್ರದ್ಧಾ ಭಕ್ತಿಗಳೊಂದಿಗೆ ಆಚರಣೆಗೊಂಡ ವಿಜಯದಶಮಿ ಹಬ್ಬ ಪಟ್ಟಣದ ಆರಾಧ್ಯದೈವಗಳಾದ ಶ್ರೀಲಕ್ಷ್ಮೀನಾರಾಯಣಸ್ವಾಮಿ,ಶ್ರೀಆಂಜನೇಯಸ್ವಾಮಿಯ ಪಲ್ಲಕ್ಕಿ ಮಹೋತ್ಸವವದೊಂದಿಗೆ ವೈಭವದಿಂದ ಮಂಗಳವಾರ ಸಂಜೆ ಅಂತಿಮ ತೆರೆಕಂಡಿತು.
ದಸರಾ ನಿಮಿತ್ಯ ಪಟ್ಟಣದಲ್ಲಿನ ಕನ್ನಿಕಾಪರಮೇಶ್ವರಿ,ಬನ್ನಿಮಹಾಕಾಳಿದೇವಸ್ಥಾನ,ರಾಂಪುರದುರ್ಗಾದೇವಿ, ಮಾರೆಮ್ಮ,ಮಾರಿಕಾಂಬ,ಗೊಲ್ಲರಹಳ್ಳಿ ಕಾಳಿಕಾದೇವಿ,ದೇವಸ್ಥಾನದಲ್ಲಿ ಸೇರಿದಂತೆ ಪಟ್ಟಣದ ವಿವಿದವಾರ್ಡುಗಳ ಶಕ್ತಿದೇವತೆಗಳ ಆಲಯಗಳಲ್ಲಿ ದಿನಂಪ್ರತಿ ವಿವಿಧ ಬಗೆಯ ಅಲಂಕಾರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರ ಸಾಗಿದ್ದವು.ಇಂದು ಸಂಜೆ ಪಟ್ಟಣದ ವಿವಿದ ಶಕ್ತಿದೇವತೆಗಳ ಪಲ್ಲಕ್ಕಿಗಳೊಂದಿಗೆ,ಬನ್ನಿಮಂಟಪಕ್ಕೆ ತೆರಳಿ ಪೂಜೆ ಸಲ್ಲಿಸಿದನಂತರ ಸಾರ್ವಜನಿಕರು ಬನ್ನಿವಿನಿಮಯ ಮಾಡಿಕೊಂಡರು.
