ಬೆಳಗಾಯಿತು ವಾರ್ತೆ | www.belagayithu.in
ಬಳ್ಳಾರಿ: 2024 ರ ಲೋಕಸಭಾ ಚುನಾವಣಾ ಅಭ್ಯರ್ಥಿ ಶ್ರೀ ರಾಮುಲು ಅವರು ಮೋದಿಯನ್ನು ಮತ್ತೊಮ್ಮೆ ಪ್ರಧಾನಿಯಾಗಿ ಮಾಡುವ ಆಶಯವನ್ನು ಇಟ್ಟುಕೊಂಡು ಇಂದು ಪ್ರಚಾರವನ್ನು ನಡೆಸಿದ್ದರು.
ಬಳ್ಳಾರಿ ಕ್ಷೇತ್ರದಲ್ಲಿ ಬಿಜೆಪಿ ಬುಹುಮತಗಳಿಂದ ಜಯಸಾಧಿಸಲು ಶ್ರೀರಾಮುಲು ಅವರು ಇಂದಿನಿಂದ ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರಗಳಾದ ಹಲಕುಂದಿ, ಎತ್ತೀನ ಬೂದಿಹಾಳ, ರೂಪನಗುಡಿ, ಪಿ.ಡಿಹಳ್ಳಿ, ಅಮರಾಪೂರ, ಭಾಗಗಳಲ್ಲಿ ಬಿರುಸಿನ ಪ್ರಚಾರವನ್ನು ಮಾಡಿದ್ದಾರೆ.
ಈ ಸಂದರ್ಭದಲ್ಲಿ ಪರಿಷತ್ ಸದಸ್ಯ ವೈ.ಎಂ.ಸತೀಶ್, ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೋಕಾ, ಎಸ್.ಟಿ.ಮೋರ್ಚಾ ಉಪಾಧ್ಯಕ್ಷ ಓಬಳೇಶ್ , ಗುರುಲಿಂಗನಗೌಡ, ಡಾ.ಅರುಣಾ, ಹನುಮಂತಪ್ಪ, ಹಾಗು ಬಿಜೆಪಿ ಮುಖಂಡರು ಸೇರಿದ್ದಂತೆ ಇನ್ನೀತರರು ಭಾಗವಹಿಸಿದ್ದರು.