ಬೆಳಗಾಯಿತು ವಾರ್ತೆ | www.belagayithu.in
ಬಳ್ಳಾರಿ: ಲೋಕಸಭೆ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಏಪ್ರಿಲ್ 12 ರಂದು ನಾಮಪತ್ರ ಸಲ್ಲಿಸುವುದಾಗಿ ಬಳ್ಳಾರಿ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಅವರು ಹೇಳಿದ್ದಾರೆ. ಕ್ಷೇತ್ರದಲ್ಲಿ ಮೇ 7 ರಂದು ಮತದಾನ ನಡೆಯಲಿದೆ.
ವಿಜಯ ನಗರ ಮತ್ತು ಬಳ್ಳಾರಿ ಜಿಲ್ಲೆಯ ಎಲ್ಲಾ ಕಾರ್ಯಕರ್ತರ ಸಮುಖದಲ್ಲಿ ಹಾಗು ರಾಜ್ಯ ಅದ್ಯಕ್ಷರಾದ ವಿಜಯೇಂದ್ರ, ಮಾಜಿ ಶಾಸಕರಾದ ಸುರೇಶ ಬಾಬು, ಮಾಜಿ ಶಾಸಕರಾದ ಸೋಮಶೇಖರ ರೆಡ್ಡಿ, ಮೈತ್ರಿ ಶಾಸಕರಾದ ಭೀಮರಾಜ ನಾಯ್ಕ,ಹಡಗಲಿಯ ಕೃಷ್ಣ ನಾಯ್ಕ, ಸಿದ್ದೇಶ್ವರ್, ಆನಂದ ಸಿಂಗ್, ಇನ್ನೀತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.