ಬೆಳಗಾಯಿತು ವಾರ್ತೆ
ಕೊಟ್ಟೂರು : ಶ್ರೀ ಗುರು ಬಸವೇಶ್ವರ ಸ್ವಾಮಿ ದೇವಸ್ಥಾನದ ನೂತನ ಧರ್ಮಕರ್ತರಾಗಿ ಎಂ.ಕೆ. ಶೇಖರಯ್ಯ ಇವರನ್ನು ಸೋಮವಾರ ನೇಮಕ ಮಾಡಲಾಯಿತು.
ಈ ಸಂದರ್ಭದಲ್ಲಿ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ
ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತರು, ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳ ಕೃಷ್ಣಪ್ಪ ಬಿ,
ಈ ಹಿಂದೆ ಇದ್ದ ಧರ್ಮಕರ್ತರಾದ ಸಿ.ಎಚ್. ಎಂ. ಗಂಗಾಧರ
ಹಾಗೂ ದೇವಸ್ಥಾನದ ಸಿಬ್ಬಂದಿ ವರ್ಗದವರು ಅರ್ಚಕರು ಹಾಜರಿದ್ದರು.
ಇದೇ ಸಂದರ್ಭದಲ್ಲಿ ಮಾಜಿ ಧರ್ಮಕರ್ತರಾದ ಸಿ.ಎಚ್. ಎಂ. ಗಂಗಾಧರ ಅವರನ್ನು ಬೀಳ್ಕೊಡಲಾಯಿತು.