35.2 C
Bellary
Saturday, March 15, 2025

Localpin

spot_img

ದಯಾಮರಣಕ್ಕೆ ಅನುಮತಿ ಕೋರಲು ಜನಸ್ಪಂದನಕ್ಕೆ ಬಂದ ಅಂಗವಿಕಲ ಮಹಿಳೆ

ಬೆಳಗಾಯಿತು ವಾರ್ತೆ / https://belagayithu.in

 ಶ್ರೀರಂಗಪಟ್ಟಣ ತಾಲೂಕಿನ ಮೀನಾ ಎಂಬ ಮಹಿಳೆಯೊಬ್ಬರು ಸರ್ಕಾರಕ್ಕೆ ದಯಾಮರಣ ಕೇಳಿ ಮನವಿ ಮಾಡಿದ್ದಾರೆ. ನನ್ನ ಪತಿ ಕೋವಿಡ್​ಗೆ ಬಲಿಯಾಗಿದ್ದರು . ನಾನು ಅಂಗವಿಕಲೆ ನನಗೆ ಯಾರೂ ಕೆಲಸ ಕೊಡುತ್ತಿಲ್ಲ. ನನ್ನ ಮಗನ ಓದಿಗೆ ಕಷ್ಟ ಆಗುತ್ತಿದೆ. ಹೀಗಾಗಿ ನಮಿಬ್ಬರಿಗೂ ದಯಾಮರಣ ಕೇಳಲು ಜನಸ್ಪಂದನ ಕಾರ್ಯಕ್ರಮಕ್ಕೆ ಬಂದಿದ್ದೇವೆ ಎಂದು ಮಾದ್ಯಮದ ಮುಂದೆ ಮಹಿಳೆ ಕಣ್ಣೀರು ಇಟ್ಟಿದ್ದಾರೆ.ಇಂದು ವಿಧಾನಸೌಧ ಆವರಣದಲ್ಲಿ ಸಿಎಂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡೆಯುತ್ತಿರುವ ಜನಸ್ಪಂದನ ಕಾರ್ಯಕ್ರಮಕ್ಕೆ ಬಂದ ಮಂಡ್ಯದ ಅಂಗವಿಕಲ ಮಹಿಳೆಯೊಬ್ಬರು ಕಣ್ಣೀರು ಹಾಕಿದ್ದಾರೆ

ನಾನು ಕೆಲಸ ಕೇಳಿದರೆ ನನ್ನನ್ನ ಕೆಟ್ಟದಾಗಿ ಬಳಸಿಕೊಳ್ಳಲು ಪ್ರಯತ್ನ ಮಾಡುತ್ತಾರೆ. ಕೆಲಸ ಕೊಡುವುದಾಗಿ ಮೊಬೈಲ್ ನಂಬರ್ ತೆಗೆದುಕೊಂಡು ಒಂದು ದಿನ ಜೊತೆಗಿರಲು ಕರೆಯುತ್ತಾರೆ. ನಾನು ಸತ್ತು ಹೋದರೆ ನನ್ನ ಮಗನನ್ನು ನೋಡಿಕೊಳ್ಳುವುದು ಯಾರು? ಹೀಗಾಗಿ ನಮಗೆ ದಯಾಮರಣ ಕೊಡಿ ಎಂದು ಮಾದ್ಯಮಗಳ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles