ನವದೆಹಲಿ- ದೆಹಲಿ ಸರ್ಕಾರವು ಬಾಲಿವುಡ್ ನಟ ಸೋನು ಸೂದ್ ಅವರನ್ನು ” ದೇಶ್ ಕೆ ಮೆಂಟರ್ ” ಉಪಕ್ರಮದ ಸದ್ಭಾವನಾ ರಾಯಭಾರಿಯಾಗಿ ನೇಮಿಸಿದೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಘೋಷಿಸಿದ್ದಾರೆ.
ಪತ್ರಿಕಾಗೋಷ್ಠಿ ಉದ್ದೇಶಿಸಿ ಶುಕ್ರವಾರ ಮಾತನಾಡಿದ ಕೇಜ್ರಿವಾಲ್. “ಪ್ರಪಂಚವು ವಿಕಸನಗೊಂಡಿದ್ದು, ಸಾಂಪ್ರದಾಯಿಕ ಅವಕಾಶಗಳನ್ನು ಹೊರತುಪಡಿಸಿ ಹೆಚ್ಚಿನ ಅವಕಾಶಗಳಿವೆ. ದೆಹಲಿ ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳು, ಸಮಾಜದ ಅಂಚಿನಲ್ಲಿರುವ ವರ್ಗಗಳಿಂದ ಬಂದವರು, ತಮ್ಮ ವೃತ್ತಿಯನ್ನು ಆಯ್ಕೆ ಮಾಡಲು ಸರಿಯಾದ ಮಾರ್ಗದರ್ಶನವನ್ನು ಸೋನ್ ಸೂದ್ ನೀಡಲಿದ್ದಾರೆ. ದೆಹಲಿ ಸರ್ಕಾರದ ದೇಶ್ ಕೆ ಮೆಂಟರ್ ಉಪಕ್ರಮದ ಅಡಿಯಲ್ಲಿ , ಅವರು ವೃತ್ತಿ ಮಾರ್ಗದರ್ಶಿಯಾಗಲು ಮನವಿ ಮಾಡುತ್ತೇವೆ” ಎಂದಿದ್ದಾರೆ.
ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಾವಿರಾರು ವಲಸೆ ಕಾರ್ಮಿಕರ ಸಹಾಯಕ್ಕೆ ಸೋನು ಸೂದ್ ನೀಡಿದ ಕೊಡುಗೆಗಳನ್ನು ಕೇಜ್ರಿವಾಲ್ ಪ್ರಶಂಸಿಸಿ,ಸರ್ಕಾರದ ಈ ಕಾರ್ಯಕ್ರಮದ ರಾಯಭಾರತ್ವ ವಹಿಡಸಲು ಸೋನ್ ಸೂದ್ ಉತ್ತಮ ವ್ಯಕ್ತಿ ಎಂದು ಹೇಳಿದ್ದಾರೆ.