ಕೊಪ್ಪಳ: ನಗರದ ಸರಕಾರಿ ನೌಕರರ ಭವನದಲ್ಲಿ ಉಪನ್ಯಾಸಕ ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್ ಇವರ ಕೊಪ್ಪಳ ಜಿಲ್ಲೆಯ ಶಾಸನಗಳು ಮತ್ತು ಸಾಂಸ್ಕøತಿಕ ಇತಿಹಾಸ ( ಪರಿಷ್ಕøತ ದ್ವಿತೀಯ ಮುದ್ರಣ) ಹಾಗೂ ಸಂಸಾರ ಸಗ್ಗ (ಪರಿಷೃತ ತೃತಿಯ ಮುದ್ರಣ) ಎರಡು ಕೃತಿಗಳ ಬಿಡುಗಡೆ ಸಮಾರಂಭ ಜರುಗಿತು. ಕಾರ್ಯಕ್ರಮದ ಉದ್ಘಾಟಕರಾಗಿ ಸಾಹಿತಿಗಳಾದ ಅಲ್ಲಮಪ್ರಭು ಬೆಟ್ಟದೂರ ಸಸಿಗೆ ನೀರೆರೆಯುವುದರ ಮೂಲಕ ಚಾಲನೆ ನೀಡಿದ ಬಳಿಕ ಕೊಪ್ಪಳದ ಸಾಂಸ್ಕøತಿಕ ಹಿರೆಮೆಯನ್ನು ಮೆಲಕು ಹಾಕುವುದರ ಮೂಲಕ ಉದ್ಘಾಟನಾ ನುಡಿಗಳನ್ನು ನುಡಿದರು.