ಬಳ್ಳಾರಿ: ಮಾಜಿ ಸಚಿವ, ಹಾನಗಲ್ ಶಾಸಕ ಸಿ.ಎಂ.ಉದಾಸಿ ಅವರ ನಿಧನಕ್ಕೆ ಕಾಂಗ್ರೆಸ್ ಎಂಎಲ್ ಸಿ ಕೆ.ಸಿ.ಕೊಂಡಯ್ಯನವರು ಸಂತಾಪ ಸೂಚಿಸಿದ್ದಾರೆ.
ಬಳ್ಳಾರಿಯಲ್ಲಿಂದು ಮಾಧ್ಯಮಗಳಿಗೆ ಈ ಕುರಿತು ವಿಡಿಯೊ ತುಣುಕನ್ನ ಬಿಡುಗಡೆ ಮಾಡಿರುವ ಕಾಂಗ್ರೆಸ್ ನ ಎಂಎಲ್ ಸಿ ಕೊಂಡಯ್ಯನವ್ರು, ಸಿ.ಎಂ.ಉದಾಸಿ ಹಾಗೂ ತಮ್ಮೊಂದಿಗಿನ ವ್ಯವಹಾರಿಕ ಜೀವನದ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಇದಲ್ಲದೇ, ಶಾಸಕ ಸಿ.ಎಂ.ಉದಾಸಿಯವರ ಅಗಲಿಕೆ ಯಿಂದ ನನಗಂತೂ ಅಗಾಧವಾದ ನೋವು ಉಂಟಾಗಿದೆ. ಅವರ ಕುಟುಂಬಕ್ಕೆ ಆ ಭಗ ವಂತ ದುಃಖ ಭರಿಸುವ ಶಕ್ತಿ ನೀಡಲೆಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಕೊಂಡಯ್ಯ ತಿಳಿಸಿದ್ದಾರೆ.