15.8 C
New York
Wednesday, March 22, 2023

Buy now

spot_img

“ನಿವೃತ್ತರಾದ ಎಷ್ಟು ಸೇನಾ ಯೋಧರಿಗೆ ಭೂಮಿ ಮಂಜೂರು ಮಾಡಲಾಗಿದೆ?”: ಶಾಸಕ ಜಿಗ್ನೇಶ್ ಮೇವಾನಿ

ಅಹಮದಾಬಾದ್: ಬನಸ್ಕಾಂತ ಜಿಲ್ಲೆಯ ಸಾವಿರಾರು ಜನರು ಸೇನೆಯಿಂದ ನಿವೃತ್ತರಾಗಿದ್ದಾರೆ. ಇಂತಹ ಸೇನಾ ಯೋಧರಿಗೆ ಎಷ್ಟು ಭೂಮಿ ಮಂಜೂರು ಮಾಡಲಾಗಿದೆ? ಎಂದು ಶಾಸಕ ಜಿಗ್ನೇಶ್ ಮೇವಾನಿ ಪ್ರಶ್ನೆ ಮಾಡಿದ್ದಾರೆ. ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಸರ್ಕಾರಿ ಯೋಜನೆಯನ್ನು ಪ್ರಾರಂಭಿಸಲು ವಡ್ಗಾಮ್ ನ ಮಹಮದ್‌ಪುರ ಗ್ರಾಮಕ್ಕೆ ಬರುವ ಒಂದು ದಿನದ ಮೊದಲು ಈ ಪ್ರಶ್ನೆ ಎತ್ತಿದ್ದಾರೆ. ಕೇಂದ್ರದ ಅಗ್ನಿಪಥ್ ಯೋಜನೆಯ ಬಗ್ಗೆ ಪ್ರಶ್ನೆಗಳನ್ನು ಕೇಳಿದ ಅವರು, ಮಹ್ಮದಪುರ ಗ್ರಾಮದ ಯುವಕರು ಕೂಡ ಸಶಸ್ತç ಪಡೆಗಳಿಗೆ ಸೇರುವ ಸಂಸ್ಕೃತಿಯನ್ನು ಹೊಂದಿದೆ ಎಂದು ಮೇವಾನಿ ಹೇಳಿದ್ದಾರೆ.

ನೀವು (ಬಿಜೆಪಿ) ಸೇನೆಯ ನೇಮಕಾತಿ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಇಂತಹ ಸಾವಿರಾರು ಯುವಕರ ಭವಿಷ್ಯವನ್ನು ಹಾಳು ಮಾಡುತ್ತಿರುವಾಗ, ಅಗ್ನಿಪಥ್ ಯೋಜನೆಯ ಬಗ್ಗೆ ಮಹಮದಪುರದ ಜನರಿಗೆ ನೀವು ಯಾವ ಸಂದೇಶವನ್ನು ನೀಡುತ್ತೀರಿ?. ಬನಸ್ಕಾಂತ ಜಿಲ್ಲೆಯ ಸಾವಿರಾರು ಜನರು ಸೇನೆಯಿಂದ ನಿವೃತ್ತರಾಗಿದ್ದಾರೆ. ಇಂತಹ ಸೇನಾ ಯೋಧರಿಗೆ ಎಷ್ಟು ಭೂಮಿ ಮಂಜೂರು ಮಾಡಲಾಗಿದೆ? ಅಂಥವರಿಗೆ ಎಷ್ಟು ಭೂಮಿ ಮಂಜೂರು ಮಾಡಲು ಸರ್ಕಾರ ಸಿದ್ಧವಿದೆಯೇ? ಎಂದು ಮೇವಾನಿ ವಿಡಿಯೋದಲ್ಲಿ ಕೇಳಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

21,981FansLike
3,745FollowersFollow
0SubscribersSubscribe
- Advertisement -spot_img

Latest Articles