ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ವಾರ್ಡ್ ನಂಬರ್ 38 ರ ಬಿ ಜೆ ಪಿ ಅಭ್ಯರ್ಥಿ ರಾಜಣ್ಣಾ ಕೊರವಿ ಭರ್ಜರಿ ಪ್ರಚಾರ ನಡೆಸಿದರು.
36 ನೇ ವಾರ್ಡಿನ ವ್ಯಾಪ್ತಿಯ ಎಕ್ತಾನಗರ, ಅಂಬಿಕಾನಗರ, ಸೇರಿದಂತೆ ಮುಂತಾದ ಕಡೆಗಳಲ್ಲಿ ಮನೆ ಮನೆಗೆ ತೆರಳಿ ಪಾದಯಾತ್ರೆ ಮೂಲಕ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜಣ್ಣಾ ಕೊರವಿ ಮತದಾರರು ನನಗೆ ಆರ್ಶೀವಾದ ಮಾಡಿದರೆ 36ನೇ ವಾರ್ಡಿನ ಸರ್ವತೋಮುಖ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತೇನೆ. ಈ ಭಾಗದ ರಸ್ತೆ, ಬೀದಿ ದೀಪ, ನೀರಿನ ಸೌಕರ್ಯ, ಸ್ವಚ್ಛತೆಗೆ ಒತ್ತು ನೀಡುತ್ತೇನೆ. ಮತ್ತು ಸುಸಜ್ಜಿತವಾದ ಗ್ರಂಥಾಲಯ,ಶುದ್ದವಾದ ಗಾಳಿಯ ಸಿಗಲು ಗುಣಮಟ್ಟದ ಉದ್ಯಾನವನ,ಮತ್ತು ಯುವಕರಿಗೆ ಆರೋಗ್ಯ ದ್ರಸ್ಟಿಇಂದ ವ್ಯಾಯಾಮ ಶಾಲೆ ವಾರ್ಡ್ ಜನರ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಅಲ್ಲದೇನಮ್ಮ ಪಕ್ಷದ ಮುಖಂಡರು ನನಗೆ ಬೆಂಬಲ ನಿಡಿದ್ದು ಕಾರ್ಯಕರ್ತರು ಬಹಳ ಉತ್ಸಾಹ ದಿಂದ ಕೆಲಸ ಕಾರ್ಯಗಳನ್ನು ಮಾಡುತ್ತದ್ದಾರೆ ಎಂದರಲ್ಲದೆ ಸರ್ಕಾರ ಹಾಗೂ ಮಹಾನಗರ ಪಾಲಿಕೆಯಿಂದ ಬರುವ ಎಲ್ಲ ಸೌಲಭ್ಯಗಳು ವಾರ್ಡ್ ಜನರಿಗೆ ಕಲ್ಪಿಸುವ ಶತಪ್ರಯತ್ನ ಮಾಡಿ ಹು-ಧಾ ಮಹಾನಗರದಲ್ಲೇ 36 ನೇ ವಾರ್ಡ್ ನ್ನು ಮಾದರಿ ವಾರ್ಡ್ ಮಾಡುವ ಗುರಿ ಹೊಂದಿದ್ದೇನೆ ಎಂದರಲ್ಲದೆ ಬಿ ಜೆ ಪಿ ಪಕ್ಷಕ್ಕೆ ತಮ್ಮ ಅತ್ಯಮೂಲ್ಯವಾದ ಮತ ನೀಡಿ ಆರ್ಶೀವದಿಸುವಂತೆ ಮತಯಾಚನೆ ಮಾಡಿದರು.
ನಂತರ ಮಾತನಾಡಿದ ಎಸ್.ಆಯ್. ನೇಕಾರ ಬಿಜೆಪಿ ಅಭ್ಯರ್ಥಿ ರಾಜಣ್ಣಾ ಕೊರವಿಯವರು ಸರಳ ಸಜ್ಜನಿಕೆಯವರಾಗಿದ್ದು ಎರಡು ಸಲ ಪಾಲಿಕೆ ಸದಸ್ಯರಾಗಿ ಸಾಕಷ್ಟು ಅಬಿವ್ರದ್ದಿಗೊಳಿಸಿ ಜನರ ಮನಸ್ಸನ್ನು ಗೆದ್ದಿದ್ದಾರೆ ಆದ್ದರಿಂದ ಈಸಾರಿನು ಪ್ರಚಂಡ ಬಹುಮತದಿಂದ ಆರಿಸಿ ತರುತ್ತೆವೆ ಎಂದರು
ಈ ಸಂದರ್ಭದಲ್ಲಿ 36ನೆವಾರ್ಡಿನ ಸದಸ್ಯರಾದ ವಿಶ್ವನಾಥ್ ಗಿರಿಮಾವ, ಅರಥಾಳಸರ್, ಮಹೇಶ ಕುಲಕರ್ಣಿ, ಮಾಹಂತೆಶ ಕರಲಿಂಗಣ್ಣವರ ,ಬಳಗೆರ,ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.