11.1 C
New York
Saturday, April 1, 2023

Buy now

spot_img

ಗಾಂಧಿವಾದಿ ಎಸ್ ಎನ್ ಸುಬ್ಬರಾವ್ ನಿಧನ

ಜೈಪುರ: ಅ, 27 (ಯುಎನ್‌ಐ) ಕಳೆದ ಕೆಲವು ದಿನಗಳಿಂದ ಇಲ್ಲಿನ ಸವಾಯಿ ಮಾನ್ ಸಿಂಗ್ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ, ಹಿರಿಯ ಗಾಂಧಿವಾದಿ ಎಸ್ ಎನ್ ಸುಬ್ಬರಾವ್ (92) ಅವರು ಹೃದಯಾಘಾತದಿಂದ ಬುಧವಾರ ಬೆಳಗ್ಗೆ ನಿಧನರಾಗಿದ್ದಾರೆ.
ಅವರ ಪಾರ್ಥಿವ ಶರೀರವನ್ನು ಎಸ್‌ಎಂಎಸ್ ಆಸ್ಪತ್ರೆಯಿಂದ ಬಾಪು ನಗರದ ವಿನೋಬಾ ಜ್ಞಾನ ಮಂದಿರಕ್ಕೆ ಸ್ಥಳಾಂತರಿಸಲಾಗಿದೆ. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಪಿಸಿಸಿ ಮುಖ್ಯಸ್ಥ ಗೋವಿಂದ್ ಸಿಂಗ್ ದೋತಾಸ್ರಾ ಮತ್ತು ಇತರ ನಾಯಕರು ಮತ್ತು ಅನುಯಾಯಿಗಳು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಸುಬ್ಬರಾವ್ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಸಿಎಂ ಗೆಹ್ಲೋಟ್, ಗಾಂಧಿವಾದಿ ನಾಯಕರಾದ ಅವರೊಂದಿಗೆ ಸುದೀರ್ಘ ಒಡನಾಟವನ್ನು ಹೊಂದಿದ್ದೆ. ಅವರು ಆಗಾಗ್ಗೆ ರಾಜಸ್ಥಾನಕ್ಕೆ ಭೇಟಿ ನೀಡುತ್ತಿದ್ದರು ಮತ್ತು ಇತ್ತೀಚೆಗೆ ಜೈಪುರಕ್ಕೆ ಬಂದಿದ್ದರು. ಅವರು ತಮ್ಮ ಶಿಬಿರಗಳ ಮೂಲಕ ದಶಕಗಳಿಂದ ದೇಶದ ಯುವಕರಿಗೆ ಸ್ಫೂರ್ತಿ ನೀಡಿದರು ಎಂದು ಸಿಎಂ ಹೇಳಿದರು. ಗೆಹ್ಲೋಟ್ ಕೂಡ ಚಿಕ್ಕ ವಯಸ್ಸಿನಲ್ಲಿ ಅವರ ಹಲವಾರು ಶಿಬಿರಗಳಲ್ಲಿ ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

21,981FansLike
3,752FollowersFollow
0SubscribersSubscribe
- Advertisement -spot_img

Latest Articles