ಬೆಂಗಳೂರು: ರಾಜ್ಯದ ವಿವಿಧೆಡೆ ಮಳೆಯಿಂದಾಗಿ ಡೆಂಗಿ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದ್ದು, ಈ ತಿಂಗಳು 1,915 ಮಂದಿಯಲ್ಲಿ ಡೆಂಗ್ಯೂ ಜ್ವರ ದೃಢಪಟ್ಟಿದೆ.
ಬಿಸಿಲು ಮಳೆಯಿಂದಾಗಿ ಡೆಂಗ್ಯೂಗ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿ- ಯಾಗುತ್ತಿವೆ. ಕೆಲವೆಡೆ ಮಳೆ ನೀರು ಹಾಗೇ ನಿಂತಿರುವುದರಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಳ ವಾಗಲಿ – ದ್ದು, ಈಡಿಸ್ ಎಂಬ ಸೊಳ್ಳೆ ಕಡಿತದಿಂದ ಈ ಜ್ವರ ಬರಲಿದೆ. ಆದ್ದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.
ವರ್ಷ ಈಗಾಗಲೇ 50 ಸಾವಿರಕ್ಕೂ ಅಧಿಕ ಡೆಂಗಿ ಶಂಕಿತರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಅವರಲ್ಲಿ 35 ಸಾವಿರಕ್ಕೂ ಅಧಿಕ ಮಂದಿಯ ರಕ್ತದ ಮಾದರಿ ಪರೀಕ್ಷೆ ಮಾಡಲಾಗಿದೆ.ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಡೆಂಗಿ ಪ್ರಕರಣಗಳು ಪತ್ತೆಯಾಗಿದ್ದು, ಈವರೆಗೆ ವರದಿಯಾದ ಒಟ್ಟು ಪ್ರಕರಣಗಳ ಸಂಖ್ಯೆ 4,175ಕ್ಕೆ ತಲುಪಿದೆ. ಸುಮಾರು ಅರ್ಧದಷ್ಟು ಪ್ರಕರಣ ಇದೇ ತಿಂಗಳಲ್ಲಿ ದೃಢಪಟ್ಟಿವೆ.
ಕಳೆದ ವರ್ಷ 9,620 ಮಂದಿ ಡೆಂಗಿ ಜ್ವರದಿಂದ ಬಳಲಿದ್ದರು. ಅವರಲ್ಲಿ ಒಂಬತ್ತು ಮಂದಿ ಜ್ವರದ ತೀವ್ರತೆಗೆ ಮೃತ ಪಟ್ಟಿರುವುದು ದೃಢಪಟ್ಟಿತ್ತು. ಈ ವರ್ಷ ಮರಣ ವರದಿಯಾಗಿಲ್ಲ.
ಬಿಬಿಎಂಪಿ ವ್ಯಾಪ್ತಿಯಲ್ಲಿಯೇ 3,457 ಮಂದಿಯ ರಕ್ತದ ಮಾದರಿ ಪರೀಕ್ಷೆ ಮಾಡಲಾಗಿದ್ದು, 2,062 ಮಂದಿಯಲ್ಲಿ ಈ ಜ್ವರ ದೃಢಪಟ್ಟಿದೆ. ಮೈಸೂರಿನಲ್ಲಿ 310, ವಿಜಯಪುರದಲ್ಲಿ 134, ಶಿವ- ಮೊಗ್ಗದಲ್ಲಿ 121, ಬೆಳಗಾವಿಯಲ್ಲಿ 112, ಚಿತ್ರದುರ್ಗದಲ್ಲಿ 104, ಧಾರವಾಡದಲ್ಲಿ 99, ಕೊಡಗಿನಲ್ಲಿ 88, ಹಾಸನದಲ್ಲಿ 78, ಬಳ್ಳಾರಿಯಲ್ಲಿ 74, ದಕ್ಷಿಣ ಕನ್ನಡ ಹಾಗೂ ಕಲಬುರಗಿಯಲ್ಲಿ ತಲಾ 72, ದಾವಣಗೆ ರೆಯಲ್ಲಿ 71, ಬಾಗಲಕೋಟೆ- ಯಲ್ಲಿ 68, ತುಮಕೂರು, ಉಡುಪಿ ಹಾಗೂ ಚಿಕ್ಕ- ಮಗಳೂರಿನಲ್ಲಿ ತಲಾ 66 ಹಾಗೂ ಗದಗದಲ್ಲಿ 63 ಪ್ರಕರಣಗಳು ದೃಢಪಟ್ಟಿವೆ. ಉಳಿದ
ಜಿಲ್ಲೆಗಳಲ್ಲಿ ಈ ಸಂಖ್ಯೆ 60ಕ್ಕಿಂತ ಕಡಿಮೆಯಿದೆ. ಚಿಕೂನ್ಗುನ್ಯಾ ಪ್ರಕರಣವೂ ಏರಿಕೆ: 28 ಜಿಲ್ಲೆಗಳಲ್ಲಿ ಚಿಕೂನ್ಗುನ್ಯಾ ಪ್ರಕರಣಗಳು ಪತ್ತೆಯಾಗಿವೆ. 21 ಸಾವಿರಕ್ಕೂ ಅಧಿಕ ಮಂದಿ ಚಿಕೂನ್ಗುನ್ಯಾ ಶಂಕಿತರನ್ನು ಗುರುತಿಸಿ, ತಪಾಸಣೆಗೆ ಒಳಪಡಿಸಲಾಗಿದೆ. 14 ಸಾವಿರಕ್ಕೂ ಅಧಿಕ ಮಂದಿಯ ರಕ್ತ ಪರೀಕ್ಷೆ ನಡೆಸಲಾಗಿದೆ. ಅವರಲ್ಲಿ 661 ಮಂದಿ ಈ ಜ್ವರಕ್ಕೆ ಒಳಗಾಗಿರುವುದು ದೃಢಪಟ್ಟಿದೆ. ವಿಜಯಪುರ (87), ಮೈಸೂರಿನಲ್ಲಿ (81) ಹಾಗೂ ಶಿವಮೊಗ್ಗದಲ್ಲಿ (54) ಅಧಿಕ ಪ್ರಕರಣಗಳು ವರದಿಯಾಗಿವೆ. ಉಳಿದ ಜಿಲ್ಲೆಗಳಲ್ಲಿ ಈ ಸಂಖ್ಯೆ 50ಕ್ಕಿಂತ ಕಡಿಮೆಯಿದೆ.
‘ಸೊಳ್ಳೆ ಕಡಿತದಿಂದ ಕಾಣಿಸಿ ಕೊಳ್ಳುವಡೆಂಗಿ, ಚಿಕೂನ್ಗುನ್ಯಾ ಪ್ರಕರಣ ಗಳು ಹೆಚ್ಚಳವಾಗುತ್ತಿವೆ ಆರೋಗ್ಯ ಇಲಾಖೆ ತಿಳಿಸಿದೆ.