ಬೆಳಗಾಯಿತು ವಾರ್ತೆ
ಮರಿಯಮ್ಮನಹಳ್ಳಿ: ಸಮೀಪದ ಡಣಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ವೆಂಕಟಾಪುರ ಗ್ರಾಮದಲ್ಲಿ ಆರು ಮನೆಗಳು ಬೆಂಕಿಗಾಹುತಿಯಾಗಿ ಭಸ್ಮವಾಗಿವೆ. ಶನಿವಾರ ಮಧ್ಯಾಹ್ನ ಗ್ರಾಮದ ಪೂಜಾರಿ ಕೊಳ್ಳಪ್ಪ, ಪೂಜಾರಿ ಸೋಮಪ್ಪ, ಬುಲ್ಡಿ ಹನುಮಂತಪ್ಪ ಯರಿಸ್ವಾಮಿ, ಅಂಜಿನಪ್ಪ, ರಾಮಪ್ಪ ಎನ್ನುವವರಿಗೆ ಸೇರಿದ ಗುಡಿಸಲುಗಳಿಗೆ ಆಕಸ್ಮಿಕ ಬೆಂಕಿ ತಗುಲಿ ಒಂದರ ಪಕ್ಕದಲ್ಲಿರುವ ಗುಡಿಸಲುಗಳಿಗೆ ಬೆಂಕಿ ಚಾಚಿಕೊಂಡು ಆರು ಗುಡಿಸಲುಗಳು ಭಸ್ಮವಾಗಿವೆ. ಗುಡಿಸಿನಲ್ಲಿ ಇದ್ದವರು ಕಬ್ಬು ಕಟಾವಿಗೆ ತೆರಳಿದ್ದರಿಂದ ಯಾವುದೇ ಪ್ರಾಣಹಾನಿಯಾಗಿಲ್ಲ. ಮನೆಯಲ್ಲಿನ ದವಸಧಾನ್ಯ,ಅಡುಗೆ ಸಾಮಾನುಗಳು ಸಂಪೂರ್ಣವಾಗಿ ಸುಟ್ಟು ಹೋಗಿವೆ.ರಾಮಪ್ಪ ಎನ್ನುವವರ ಮನೆಯಲ್ಲಿದ್ದ ಬೈಕ್ ಕೂಡ ಸುಟ್ಟು ಕರಕಲಾಗಿದೆ.ಲಕ್ಷಾಂತರ ರೂ.ಗಳ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಅಗ್ನಿಶಾಮಕ ದಳ ಬಿ.ಎಂ.ಎಂ.ಅಗ್ನಿಶಾಮಕ ದಳ ಸಕಾಲಕ್ಕೆ ಆಗಮಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.