ಬಳ್ಳಾರಿ: ಕೊರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ 15ರಿಂದ 18 ವರ್ಷ ವಯಸ್ಸಿನವರಿಗೆ ಲಸಿಕೆ ನೀಡುವ ಕಾರ್ಯಕ್ರಮ ಆರಂಭಿಸಿದ್ದು, ಶುಕ್ರವಾರ ಬಳ್ಳಾರಿ ನಗರದ 13 ನೇ ವಾರ್ಡ್ ನ ಮಿಲ್ಲರ್ ಪೇಟೆಯ ಅನ್ವರ್ ಶಾಲೆಯಲ್ಲಿ ಮಾಜಿ ಮೇಯರ್, ಪಾಲಿಕೆ ಸದಸ್ಯ ಸಿ.ಇಬ್ರಾಹಿಂ(ಬಾಬು) ಅವರ ನೇತೃತ್ವದಲ್ಲಿ ಲಸಿಕೆ ನೀಡಲಾಯಿತು.