ಪೌರ ಕಾರ್ಮಿಕರು ಹಾಗೂ ಹೋರ ಗುತ್ತಿಗೆ ನೌಕರರನ್ನು ಖಾಯಂಗೊಳಿಸಲು ಆಗ್ರಹಿಸಿ ಜುಲೈ 21ರಿಂದ ಅನಿರ್ದಿಷ್ಟ ಧರಣಿ.

0
142

ಬೆಳಗಾಯಿತು ವಾರ್ತೆ
ಬಳ್ಳಾರಿ: ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ಪೌರಕಾರ್ಮಿಕರು ಹಾಗೂ ಹೊರಗುತ್ತಿಗೆ ನೌಕರರನ್ನು ಖಾಯಂ ಗೊಳಿಸುವಂತೆ ಆಗ್ರಹಿಸಿ ಜುಲೈ 01ರಿಂದ ಅನಿರ್ದಿಷ್ಟ ಧರಣಿ ಮಾಡಲಾಗುವುದು ಎಂದು ಸಮಾನತೆ ಯೂನಿಯನ್ ಕರ್ನಾಟಕ ಸಂಘದ ರಾಜ್ಯಾಧ್ಯಕ್ಷ ನಾರಾಯಣ ಅವರು ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದ ಪತ್ರಿಕಾ ಭವನದಲ್ಲಿ ಶನಿವಾರ ಆಯೋಜಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ರಾಜ್ಯದ 314 ನಗರ ಸ್ಥಳೀಯ ಸಂಸ್ಥೆಗಳಲ್ಲಿ 30 ಸಾವಿರ ಪೌರ ಕಾರ್ಮಿಕರು,10 ಸಾವಿರ ಹೊರಗುತ್ತಿಗೆದಾರರು ಸ್ವಚ್ಛತೆ ಹಾಗೂ ಕುಡಿಯುವ ನೀರು ಸೇವೆಯಲ್ಲಿ ತೋಡಗಿದ್ದು, ಅವರಿಗೆ ಭದ್ರತೆ ಇಲ್ಲದಂತಾಗಿದೆ ಎಂದರು.
ಈ ಸಂದರ್ಭದಲ್ಲಿ ಎಂ.ಬಿ ನಾಗಣ್ಣ, ರತ್ನಮ್ಮ, ಶರಣು, ಉರುಕುಂದಪ್ಪ, ರಾಮಚಂದ್ರ, ಎ. ಕಾಳಿ ಪ್ರಸಾದ್ ಇದ್ದರು.

Previous articleಪ್ಯಾರಾ ಶೂಟಿಂಗ್ ವಿಶ್ವಕಪ್‌: ವಿಶ್ವ ದಾಖಲೆ ಮಾಡಿದ ಭಾರತದ ಅವನಿ ಲೆಖರಾ
Next articleಹಂಪಿಯನ್ನು ಆರೋಗ್ಯವಂತ ನಾಡನ್ನಾಗಿ ಮಾಡುವ ಮೂಲಕ ವಿಶ್ವದ ಗಮನ ಸೆಳೆಯುವಂತೆ ಮಾಡಬೇಕಿದೆ

LEAVE A REPLY

Please enter your comment!
Please enter your name here